Focus News
Trending

ನಿವೇದಿತ್ ಆಳ್ವಾಗೆ ಟಿಕೆಟ್ ನೀಡಲು ಮುಸ್ಲಿಂ ಜಮಾತ್ ವಿರೋಧ

ಹೊನ್ನಾವರ : ಕುಮಟಾ-ಹೊನ್ನಾವರ ವಿಧಾನಸಭಾಕ್ಷೇತ್ರದಕಾಂಗ್ರೆಸ್‌ ಅಭ್ಯರ್ಥಿಯಾಗಲೂಕಾoಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನದಲ್ಲಿರುವ ನಿವೇದಿತ್ ಆಳ್ವಾರವರಿಗೆ ಹೊನ್ನಾವರ ಮುಸ್ಲಿಂ ಜಮಾತ್‌ಅಧ್ಯಕ್ಷಆಝಾದಅಣ್ಣಿಗೇರಿತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಈ ಕುರಿತಂತೆಕರ್ನಾಟಕ ಪ್ರದೇಶಕಾಂಗ್ರೆಸ್ ಸಮಿತಿಯಉಸ್ತುವಾರಿಯಾಗಿರುವ ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾರಿಗೆ ಪತ್ರ ಬರೆದು, ನಿವೇದಿತ್ ಆಳ್ವಾ ಅವರಿಗೆ ಪಕ್ಷದಟಿಕೇಟ್ ನೀಡದೇ,ಕುಮಟಾ-ಹೊನ್ನಾವರ ಭಾಗದಲ್ಲಿಜನಪ್ರಿಯರಾಗಿರುವ ಶಿವಾನಂದ ಹೆಗಡೆಯವರಿಗೆ ಪಕ್ಷದಟಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ.

ನಿವೇದಿತ್ ಆಳ್ವಾ ಕುಮಟಾ-ಹೊನ್ನಾವರ ವಿಧಾನಸಭಾಕ್ಷೇತ್ರಕ್ಕೆ ಹೊಸಬರಾಗಿದ್ದು,ಅವರಿಗೆಯಾವುದೇರಾಜಕೀಯಅನುಭವವಿಲ್ಲಾ ಮತ್ತು ಈ ಭಾಗದಲ್ಲಿ ಸಾರ್ವಜನಿಕರ ಸಂಪರ್ಕವೂ ಇಲ್ಲಾ ಎoದು ಪತ್ರದಲ್ಲಿತಿಳಿಸಿದ್ದಾರೆ.ನಿವೇದಿತ್ ಆಳ್ವಾರಂತಹ ಅನುಭವವಿಲ್ಲದವರನ್ನುಕಾಂಗ್ರೆಸ್ ಪಕ್ಷಅಭ್ಯರ್ಥಿಯಾಗಿ ಘೋಷಿಸಿದರೇ, ಇದರಿಂದ ಭಾರತೀಯಜನತಾ ಪಕ್ಷ ಜಯಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲಾ ಎoದಿದ್ದಾರೆ. ಭಾರತೀಯಜನತಾ ಪಕ್ಷದಅಭ್ಯರ್ಥಿಆಯ್ಕೆಯಾಗುವುದನ್ನುತಪ್ಪಿಸಬೇಕಾದರೇ,ಹೊನ್ನಾವರ ಮುಸ್ಲಿಂ ಜಮಾತ್ ಅನಿವಾರ್ಯವಾಗಿಜೆ.ಡಿ.ಎಸ್. ಪಕ್ಷದಅಭ್ಯರ್ಥಿಗೆ ಬೆಂಬಲ ಸೂಚಿಸಬೇಕಾಗುತ್ತದೆಎಂದು ಎಚ್ಚರಿಸಿದ್ದಾರೆ.

ಆದುದರಿಂದ ಸ್ಥಳೀಯವಾಗಿ ಜನರೊಂದಿಗೆಉತ್ತಮ ಬಾಂಧವ್ಯ ಹೊಂದಿರುವ ಶಿವಾನಂದ ಹೆಗಡೆಯವರಿಗೆಕಾಂಗ್ರೆಸ್ ಪಕ್ಷಟಿಕೇಟ್ ಘೋಷಿಸಿದ್ದಲ್ಲಿ, ಕಾಂಗ್ರೆಸ್ ಪಕ್ಷದಅಭ್ಯರ್ಥಿಯ ಗೆಲುವಿಗೆ ಹೊನ್ನಾವರ ಮುಸ್ಲಿಂ ಜಮಾತ್ ಸಂಪೂರ್ಣ ಬೆಂಬಲಿಸುವುದಾಗಿ ರಣದೀಪ್ ಸಿಂಗ್ ಸುರ್ಜೆವಾಲಾರಿಗೆ ಬರೆದ ಪತ್ರದಲ್ಲಿಜಮಾಲ್‌ಆಝಾದಅಣ್ಣಿಗೇರಿ ಆಗ್ರಹಿಸಿದ್ದಾರೆ. ಇದರಿಂದ ಕಾoಗ್ರೆಸ್ ಪಕ್ಷದಟಿಕೇಟ್ ಪ್ರಯತ್ನದಲ್ಲಿರುವ ನಿವೇದಿತ್ ಆಳ್ವಾರವರಿಗೆ ತೀವ್ರ ಹಿನ್ನಡೆಉಂಟಾಗಿದೆ.

Back to top button