Uttara Kannada
Trending

ಭಟ್ಕಳದಲ್ಲಿ ಎರಡು ಗುಂಪಿನ ಮಧ್ಯೆ ಸಭೆ ವೇಳೆ ವಾಗ್ವಾದ: ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಗಲಾಟೆ

ಸಭೆಯಿಂದ ಹೊರನಡೆದ ಒಂದು ಗುಂಪು
ಶಾಸಕರ ಸಮ್ಮುಖದಲ್ಲೇ ವಾಗ್ವಾದ
ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

ಭಟ್ಕಳ: ತಾಲೂಕಿನ ಮೂರಿನಕಟ್ಟೆ ಸ್ಥಳಾಂತರಕ್ಕೆ ಸಂಬoಧಿಸಿದ0ತೆ ಶನಿವಾರದಂದು ರಾತ್ರಿ ಶಾಸಕ ಸುನೀಲ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಎರಡು ಗುಂಪಿನವರ ಸಭೆಯಲ್ಲಿ ಬಾರಿ ವಾದ ವಿವಾದ ಚರ್ಚೆ ನಡೆದು ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಒಂದು ಕೋಮಿನವರು ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.

ಸಭೆಯ ಆರಂಭದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ ದಕ್ಷಿಣ ಕನ್ನಡದಿಂದ ಬರುವಂತಹ ಮಾರಿ ಹೊರೆ ಇದಾಗಿದ್ದು ತಾಲುಕಿನ ಪುರವರ್ಗ, ಬಂದರ ಕಡೆಯಿಂದ ಜನರು ತಂದಿರುವ ಹೊರೆಯನ್ನು ಮೂರಿನಕಟ್ಟೆಯಲ್ಲಿ ಹಾಕಲಿದ್ದು ಅಲ್ಲಿಂದ ಒಂದೊoದು ಕಟ್ಟೆಗೆ ಸ್ಥಳಾಂತರಗೊ0ಡು ಶಿರಸಿಗೆ ಹೋಗಲಿದೆ. ಅಲ್ಲಿಂದ ಆಯಾ ಊರಿನ ಗ್ರಾಮಸ್ಥರು ಪೂಜೆ ಸಲ್ಲಿಸಿ ಅದನ್ನು ಮುಂದಿನ ಸ್ಥಳಕ್ಕೆ ಇಟ್ಟು ಬರುತ್ತಾರೆ. ಮೂರಿನಕಟ್ಟೆಯೂ ಅಂತಹ ಒಂದು ಕಟ್ಟೆಯಾಗಿದ್ದು, ಇದು ತಲತಲಾಂತರಗಳಿoದ ನಡೆದುಬಂದ ಸಂಪ್ರದಾಯ. ಈಗ ರಸ್ತೆ ಅಗಲೀಕರಣದಿಂದ ಜಾಗ ಹೋಗಲಿದ್ದು, ಒಂದೇ ಅಲ್ಲಿಯೇ ಸ್ಥಳಾವಕಾಶ ನೀಡಿ ಇಲ್ಲವಾದರೆ ಬೇರೆ ಜಾಗ ನೀಡಿ ಅಥವಾ ಯಥಾಸ್ಥಿತಿ ಕಾಪಾಡಿ ರಸ್ತೆ ಅಗಲೀಕರಣ ವನ್ನು ತಿರುವುಗೊಳಿಸಿ ಕಾಮಗಾರಿ ನಡೆಸಿರಿ ಎಂದು ತಾಕೀತು ಮಾಡಿದರು.

ಇದಕ್ಕೆ ತಂಝೀoನ ಸದಸ್ಯ ಹಾಸೀಮ್ ಎಜೆ ಮಾತನಾಡಿ ಇಲ್ಲಿ ಕಟ್ಟೆ ಇಲ್ಲ. ಹೊರೆ ತಂದು ಇರಿಸುವುದು ನಮ್ಮ ಗಮನಕ್ಕೂ ಇದೆ ಹಾಗಂತ ಅದರ ಹೆಸರಲ್ಲಿ ಕಟ್ಟೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದರು. ನ್ಯಾಯವಾದಿ ರಾಜೇಶ ನಾಯ್ಕ ಮಾತನಾಡಿ ಕಾಲಕಾಲಕ್ಕೆ ಬದಲಾಗಿ ಬರುವ ಅಧಿಕಾರಿಗಳು ಇಂತಹ ಸನ್ನಿವೇಶ ಬಂದಾಗ ಕಟ್ಟೆ ಇದ್ದ ಬಗ್ಗೆ ಪುರಾವೆ ಕೇಳುತ್ತಾರೆ. ಈಗಲೂ ಅಧಿಕಾರಿಗಳು ಅದನ್ನೇ ಕೇಳುತ್ತಿದ್ದಾರೆ. ಈಗ ಕಟ್ಟೆ ಕಟ್ಟದಿದ್ದರೆ ಮುಂದೆ ನಮ್ಮ ಧಾರ್ಮಿಕ ಸ್ಥಳವನ್ನೆ ಕಳೆದುಕೊಳ್ಳಬೇಕಾಗುತ್ತದೆ. ಮತ್ತು ನಮ್ಮ ಧಾರ್ಮಿಕ ಜಾಗ ನಮಗೆ ಬೇಕೇ ಬೇಕು ನಾವು ಉಳಿಸಿಕೊಳ್ಳಲಿದ್ದೇವೆ ಎಂದರು.

ಇದಕ್ಕೆ ತಂಝೀo ಅಧ್ಯಕ್ಷ ಎಸ್. ಎಂ. ಪರ್ವೇಜ್ ಹಾಗೂ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ ಹಿಂದಿನಿoದಲೂ ಇಲ್ಲಿ ಧಾರ್ಮಿಕ ಕಾರ್ಯ ನಡೆಯುವ ಬಗ್ಗೆ ನಮಗೆ ಅರಿವಿದೆ. ಹಾಗಂತ ಬೇರೆಯವರ ಮನೆ ಮುಂದೆ ಕಟ್ಟೆ ಕಟ್ಟಿ ಪೂಜೆ ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಬೇಕಾದರೆ ಇದ್ದ ಸ್ಥಳದಲ್ಲೆ ಕಟ್ಟೆ ನಿರ್ಮಿಸಿ ಹೆದ್ದಾರಿಯನ್ನು ಪಕ್ಕದಲ್ಲಿ ನಿರ್ಮಾಣ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದರು.

ಸಿಪಿಐ ದಿವಾಕರ್ ಮಾತನಾಡಿ ಕಟ್ಟೆಯನ್ನು ಯಾವುದೇ ಖಾಸಗಿ ಜಾಗದಲ್ಲಿ ನಿರ್ಮಾಣ ಮಾಡುವುದಿಲ್ಲ. ಬದಲಾಗಿ ಹೆದ್ದಾರಿ ಪಕ್ಕದಲ್ಲೆ ಇರುವ ಟೆಲಿಪೋನ್ ಕಂಬದ ಪಕ್ಕ ನಿರ್ಮಾಣಕ್ಕೆ ಅವಕಾಶ ನೀಡುತ್ತೇವೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಇನಾಯಿತುಲ್ಲಾ ಶಾಬಂದ್ರಿ ಖಾಸಗಿ ಮನೆ ಮುಂದೆ ಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಅದನ್ನು ರಂಗಿನಕಟ್ಟೆಯಲ್ಲಿರುವ ಗಣಪತಿ ದೇವಸ್ಥಾನದ ಹತ್ತಿರ ಸ್ಥಾಪನೆ ಮಾಡಿಕೊಳ್ಳಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುನೀಲ ನಾಯ್ಕ ‘ಇಲ್ಲಿ ಕಟ್ಟೆ ನಿರ್ಮಾಣ ಮಾಡಿ ಯಾವುದೇ ಪೂಜೆ ಕೈಂಕರ್ಯ ಮಾಡುವುದಿಲ್ಲ. ಬದಲಾಗಿ ಅಮ್ಮನವರ ಹೊರೆಯನ್ನು ತಂದಿಟ್ಟು ಮುಂದಿನ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಇದಕ್ಕೆ ಎಲ್ಲರೂ ಅವಕಾಶ ನೀಡಬೇಕು ಎಂದರು.

ಒoದು ಹಂತದಲ್ಲಿ ಶಾಂತವಾಗಿದ್ದ ಸಭೆಯಲ್ಲಿ ಗದ್ದಲ ಗಲಾಟೆ ಶುರುವಾಗಿದ್ದು ವಾದ ವಿವಾದ ನಂತರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಟ್ಟೆಯನ್ನು ಸ್ಥಳಾಂತರ ಮಾಡಲು ಉಭಯತರರು ಒಪ್ಪಿಕೊಂಡಿದ್ದರಯ, ಆದರೆ ಆ ಸ್ಥಳದಲ್ಲಿ ಕಟ್ಟೆ ನಿರ್ಮಾಣ ಮಾಡಿ ನಾಮಫಲಕ ಹಾಕದಂತೆ ತಂಝೀ ನವರು ವಿರೋಧ ಮಾಡಿದರು.
ಇದರಿಂದ ಕೋಪಗೊಂಡ ಕೃಷ್ಣ ನಾಯ್ಕ ‘ಎನೇ ಆದರೂ ನಾವು ಆ ಸ್ಥಳದಲ್ಲಿ ಕಟ್ಟೆ ನಿರ್ಮಾಣ ಮಾಡಿಯೇ ತೀರುತ್ತೇವೆ. ಯಾರೇ ಅಡ್ಡ ಬಂದರು ಕಟ್ಟೆ ನಿರ್ಮಾಙ ಮಾಡಲಿದ್ದೇವೆ. ನಿಮ್ಮ ಅವಧಿಯಲ್ಲಿ ಕಟ್ಟೆ ನಿರ್ಮಾಣ ಮಾಡದಿದ್ದರೆ ನಮಗೆ ಹೇಗೆ ಮಾಡಬೇಕು ಎಂದು ತಿಳಿದಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೊಂದಿಗೆ ಸರಕಾರರದಿಂದ ಅನುಮತಿ ಸಿಕ್ಕಿದ್ದಲ್ಲಿ ಮಾರಿನಕಟ್ಟೆಯ ಕಟ್ಟೆ ನಿರ್ಮಾಣ ಮಾಡಿಯೇ ತಿರಲಿದ್ದೇವೆ ಎಂದು ಸವಾಲು ಹಾಕಿದರು.

ಇದರಿಂದ ಆಕ್ರೋಶಗೊಂಡ ಮುಸ್ಲೀಂ ಯೂಥ ಅಧ್ಯಕ್ಷ ಅಜೀಜು ರೆಹಮಾನ್ ಸರಕಾರದಿಂದ ಅನುಮತಿ ಪಡೆದು ಕಟ್ಟೆ ಹೇಗೆ ನಿರ್ಮಾಣ ಮಾಡಲಿದ್ದೀರಿ ಎಂದು ನಾವು ನೋಡುತ್ತೇವೆಂದು ಸವಾಲು ಹಾಕಿದರು.
ಇದರಿಂದ ಮಾರಿನಕಟ್ಟೆ ಜಾಗದ ಪರವಾಗಿದ್ದ ಪ್ರಮುಖ ಕ್ರಷ್ಣ ನಾಯ್ಕ ಆಸರಕೇರಿ ಆಕ್ರೋಶಕೊಂಡು ನಮಗೆ ಸವಾಲು ಹಾಕಿದ್ದಲ್ಲಿ ಹೇಗೆ ಕಟ್ಟೆ ಕಟ್ಟಬೇಕೆಂದು ನಮಗೆ ಗೊತ್ತಿದೆ ಎಂದು ಸಭೆಯಿಂದ ಹೊರ ನಡೆದರು.

ಇದರಿಂದ ಎರಡು ಗುಂಪಿನ ನಡುವೆ ಕೆಲಕಾಲ ಕೋಲಾಹಲ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅಧಿಕಾರಿಗಳು ಉಭತರರನ್ನು ಸಂತೈಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಶಾಸಕರು ಸೇರದಿಂತೆ ಕಟ್ಟೆಯ ಪರವಾದ ಗುಂಪಿನವರು ತಮ್ಮ ಸಂಘಟನೆಯ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿ ಸಭಾತ್ಯಾಗ ಮಾಡಿದರು. ಸಭೆಯಲ್ಲಿ ಸಹಾಯಕ ಆಯುಕ್ತ ಭರತ್ ಎಸ್., ತಹಸೀಲ್ದಾರ ರವಿಚಂದ್ರ, ಸಿಪಿಐ ದಿವಾಕರ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್,ಉದಯ್ ಎಸ್ ನಾಯ್ಕ, ಭಟ್ಕಳ

Back to top button